Friday 8 November 2013

ಸಾಲುಗಳು : ಡಾ.ಜಿ. ಕೃಷ್ಣ





ಈ ಗಿಡ 
ಗಂಡು ಹೆಣ್ಣು
ಹತ್ತಿರವಿದ್ದೂ
ಫಲವಂತಿಕೆಗೆ
ಚಿಟ್ಟೆಯ ಸಹಾಯ ಕೇಳುತ್ತಲ್ಲ ಗಾಲಿಬ್,
ಅಪ್ಪಿ ಮುದ್ದಾಡೋಕೂ
ಕಷ್ಟನಾ?



 








 









ನನ್ನ ನೋಡಿ ನಗುವ
ಲೋಕ ಸರಿಯಿಲ್ಲ
ಎಂದೆ
ಅಹಂಕಾರ ಎಂದರು
ನನ್ನನ್ನೇ ನೋಡಿಕೊಂಡು
ನಕ್ಕೆ
ವಿನಯ ಅತಿಯಾಯ್ತು,
ಕೀಳರಿಮೆಯೂ ಇರಬಹುದು
ಎಂದುಬಿಟ್ಟರು
ಅಹಂಕಾರ, ವಿನಯದ
ಮಧ್ಯದ ದಾರಿ
ಶ್ರೇಷ್ಟ ಎಂದರು
ಕತ್ತಿಯಂಚು
ಕಾಲೆಲ್ಲ ಗಾಯ.





 




 




 ***

No comments:

Post a Comment