Saturday 5 October 2013


 ಮೂರು ಕವಿತೆಗಳು

ಡಾ.ಅನುಪಮಾ ಎಚ್.ಎಸ್













ಜಗದ ಕಣ್ಣಿಗೆ ಹಸಿದ ನೀನು ಕಾಣುವುದೊಂದು ಬಗೆ
ನಿನ್ನ ಹಸಿವೆಯೇ ನಾನಾಗಿ ಅರಿವುದಿನ್ನೊಂದು ಬಗೆ





ಬಿರುಗಾಳಿಗೆದುರಾಗಿ ನಡೆಯುತ್ತಿದ್ದೇವೆ
ಬಟ್ಟೆ ಬಿಚ್ಚಿಡು, ಮಡಚು ಎನುವೆಯಲ್ಲ?





ಕೊರೆವ ಮಂಜು ಸುರಿವ ಈ ಇರುಳು
ನಾಲ್ಕು ಗೋಡೆಗಳ ನಡುವೆ ಕುಳಿತು
ಬರಲಿರುವ ವಸಂತದ ಬೆಳಗಿನ ಕುರಿತು
ಕವಿತೆ ಬರೆಯಬೇಕೆನಿಸುತ್ತಿದೆ

ಅಪರಾಧವೇನಲ್ಲ
ಕತ್ತಲಾಗುವವರೆಗೂ ಆಗಸದ ಚುಕ್ಕಿಗಳು ಮಿನುಗುವುದಿಲ್ಲ
ಶಿಶಿರನ ಹಿಂದೆ ವಸಂತ ಕಾಲಿಡದೇ ಬೇರೆ ದಾರಿಯಿಲ್ಲ..




No comments:

Post a Comment