Monday 7 October 2013

ಬಸೂ
 
ನಾನು ಕನ್ನಡಿ ನಿಜ
ನೀ ಕಾಣಬೇಕಿದ್ದರೆ ಬೆಳಕಿರಬೇಕು.
 
 
ಸಮಯ ನುಂಗಿದವರ ಅಡಿಯಲ್ಲೇ ಇರುವುದೆಂದಲ್ಲ
ಅಷ್ಟು ತಣ್ಣನೆಯ ಚಂದ್ರ ಹಗಲ ಹೊಟ್ಟೆಯನ್ನೇ ಸೀಳಿಕೊಂಡು ಬಂದ.
 
 
 

 
 
 
 
 
 
 
 
 
 
 
 
 
 
 
 
 
ಲೆಕ್ಕ ಹಾಕಬಾರದೆಂದರೂ ಅಷ್ಟು ಸಲ ಸೂಜಿಯಿಂದಲೇ
ಪ್ರೇಮದ ಹೂ ಬದುಕಿನ ದಾರದಲಿ ಪೋಣಿಕೆಯಾಯಿತು
.

 
 
 
ಮುಚ್ಚಿದ ಕಂಗಳ ಬಗ್ಗೆ ಏನೂ ಹೇಳಲಾರೆ
ಎಷ್ಟೊ ಸಲ ತೆರೆದ ಕಣ್ಣೇ ಕಾಣುವುದಿಲ್ಲ.
 

 
 
 
  
ಚಿದಂಬರ್ ನರೇಂದ್ರ
ಬಾಪು,
ನಿನ್ನ ನೋಡಿ ನಗುವುದು,
ನಿನ್ನ ನೆನೆದು ಅಳುವುದು
ಎರಡೂ ಆತ್ಮವಂಚನೆಗಳೇ.
 
 


 
 
ಮೇಲೆ ಹಾರುತ್ತಿದ್ದoತೆಯೇ
ಪತಂಗ
ತನ್ನ ನೆರಳು ಕಳೆದುಕೊಳ್ಳುತ್ತದೆ.
 
 
 
 
Rajendra Prasad
ಹಗಲು ರಾತ್ರಿಗಳು
ಮರೆತು ಹೋಗಿ 
ಹೊಟ್ಟೆ ಹಸಿದಾಗ 
ಅವಳ ರಸಿಕತೆಗೆ 
ನಾನು ಬೆಪ್ಪಾದೆ.. 

ಥೇಟ್ ಭತ್ತದಗದ್ದೆಯಲಿ
ನಿಂತ ಬೆದರುಬೊಂಬೆ!
 


 
 

No comments:

Post a Comment