Thursday 19 December 2013

ಡಿಸೆಂಬರ್ 19, ಗೋವಾ ವಿಮೋಚನಾ ದಿನ 


ವಿಶ್ವನಾಥ ರೆಡ್ಡಿ

 


ಗೋವಾದಲ್ಲಿ ಪ್ರತಿವರ್ಷ ಡಿಸೆಂಬರ್ 19 ರಂದು "ಗೋವಾ ವಿಮೋಚನಾ ದಿವಸ" ಆಚರಿಸಲಾಗುತ್ತದೆ. 19.12.1961ರಂದು ನಾಲ್ಕುನೂರುವರೆ ವರ್ಷಗಳ ದೀರ್ಘವಾದ ದಾಸ್ಯದ ಹಿಂಸೆಯಿಂದ ಗೋವಾ ಮುಕ್ತವಾಯಿತು.

ಬ್ರಿಟಿಷ್, ಡಚ್, ಫ್ರೆಂಚ್ ಇತ್ಯಾದಿ ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿ ರಾಷ್ಟ್ರಗಳ ತುಲನೆಯಲ್ಲಿ ಪೋರ್ತುಗಾಲವು ೨೨.೫.೧೪೯೮ರಂದು ವಾಸ್ಕೊ-ದ-ಗಾಮಾ ಇವನ ರೂಪದಲ್ಲಿ ಭಾರತದಲ್ಲಿ ಎಲ್ಲರಿಗಿಂತ ಮೊದಲು ಕಾಲಿಟ್ಟತು. ಕ್ರಿ.ಶ. ೧೯೬೧ರಲ್ಲಿ ಮರಳಿಹೋದ ವಸಾಹತಶಾಹಿಗಳ ಪರಾಭವದ ನಿಜವಾದ ಶಿಲ್ಪಕಾರ - ಹಿರಿಯ ರಾಷ್ಟ್ರಭಕ್ತ ಡಾ. ರಾಮಮನೊಹರ ಲೋಹಿಯಾ! ಪೋರ್ತುಗಾಲದಲ್ಲಿಯೇ ‘ಫ್ಯಾಸಿಸ್ಟ’ ರಾಜ್ಯಾಡಳಿತ ನಡೆಸುವ ಡಾ. ಸಾಲಾಝಾರನ ರಾಜ್ಯದಲ್ಲಿ ವಾಕ್ಸ್ವಾತಂತ್ರ್ಯ, ವಿಚಾರಸ್ವಾತಂತ್ರ್ಯ, ಸಂಘಟನೆಯ ಸ್ವಾತಂತ್ರ್ಯ, ವರ್ತಮಾನಪತ್ರಿಕೆಯ ಸ್ವಾತಂತ್ರ್ಯ ಇತ್ಯಾದಿಗಳ ಜೀವನಾವಶ್ಯಕ ಮಾನವೀಯ ಮೌಲ್ಯಗಳಿಗೆ ಎಳ್ಳಷ್ಟೂ ಬೆಲೆಯಿರಲಿಲ್ಲ. ಆ ಸಮಯದಲ್ಲಿ ಗೋವಾವನ್ನು ತನ್ನ ರಾಷ್ಟ್ರದ ಭಾಗ ಎಂದು ಪರಿಗಣಿಸುತ್ತಿದ್ದ ಆ ಫ್ಯಾಸಿಸ್ಟಗಳಿಂದ ಗೋವಾದಲ್ಲಿ ಬೇರೆ ಯಾವ ಸ್ಥಿತಿಯನ್ನು ನಿರೀಕ್ಷಿಸಬಹುದಿತ್ತು ? ಅಮಾನುಷ ದಬ್ಬಾಳಿಕೆಯು ಅವರ ರಾಜ್ಯಭಾರದ ವಿಶೇಷ ಗುಣವಾಗಿತ್ತು! ಇಂತಹ ಪರಿಸ್ಥಿತಿಯಲ್ಲಿ ಪೋರ್ತುಗಿಜ್ ದಾಸ್ಯದ ಸರಪಳಿಗಳನ್ನು ಕಡಿಯಲು ಅನೇಕರು ಅವಿರತವಾಗಿ ಪ್ರಯತ್ನಗಳನ್ನು ಮಾಡಿದರು. ಅದರಲ್ಲಿ ಎಷ್ಟೋ ಗೋಮಾಂತಕೀಯ ಸುಪುತ್ರರನ್ನು ಕೊಂದು ಹಾಕಿದರು, ಗಲ್ಲಿಗೇರಿಸಿದರು ಅಥವಾ ಆಫ್ರಿಕೆಗೆ ಗಡಿಪಾರು ಮಾಡಲಾಯಿತು. ಆದರೂ ಗೋವಾ ಮುಕ್ತಿಯ ಪ್ರಯತ್ನಗಳು ನಡೆದಿದ್ದವು; ಆದರೆ ಈ ಪ್ರಯತ್ನದಲ್ಲಿ ನಿಜವಾದ ಅರ್ಥದಿಂದ ಪ್ರಾಣ ಮತ್ತು ಚೈತನ್ಯ ತಂದವರು ಡಾ. ಲೋಹಿಯಾ !


 File:Ram Manohar Lohia.jpg

‘ಸಾಲಾಝಾರ'ನ ‘ಫ್ಯಾಸಿಸ್ಟ’ ಅಧಿಕಾರವಿದ್ದರೂ ಏನಾಯಿತು? ಗೋಮಂತಕ ಭಾರತ ಭಾಗ! ಭಾರತದ ಸ್ವಾತಂತ್ರ್ಯದೊಂದಿಗೆ ಗೋವಾ ಮುಕ್ತವಾಗಲೇಬೇಕು’ ಎಂಬ ಬಲವಾದ ನಂಬಿಕೆ ಇದ್ದ ಡಾ. ಲೋಹಿಯಾ, ತನ್ನ ಭಾಷಣ ಪ್ರಾರಂಭ ಮಾಡಿದಾಗಲೇ ಅಲ್ಲಿ ಉಪಸ್ಥಿತವಿದ್ದ ಅಧಿಕಾರಿ ಕ್ಯಾಪ್ಟನ್ ಮಿರಾಂಡಾ ಅವರನ್ನು ತಡೆಗಟ್ಟಿ ಸ್ಪಷ್ಟವಾಗಿ 'ಗೋವಾದಲ್ಲಿ ಭಾಷಣ ಮಾಡಲು ನಿರ್ಬಂಧವಿದೆ’ ಎಂದು ಹೇಳಿದನು. ಆಗ ದೇಶಭಕ್ತಿಯಿಂದ ತುಂಬಿ ತುಳುಕುವ ಡಾ. ಲೋಹಿಯಾ ಇವರು 'ಭಾಷಣ ಮಾಡುವುದು ನಮ್ಮ ಮೂಲಭೂತ ಅಧಿಕಾgವಿದ್ದು' ತಾವು ಅಹಿಂಸೆಯ ಮಾರ್ಗದಿಂದ ಸಭೆ ನಡೆಸುವುದಾಗಿ ಹೇಳಿ ನಿರ್ಭಯವಾಗಿ ತಮ್ಮ ಭಾಷಣವನ್ನು ನಡೆಸಿದ್ದರು. ಅದನ್ನು ನೋಡಿ ಸಿಟ್ಟಿಗೆದ್ದ ಕ್ಯಾಪ್ಟನ್ ಮಿರಾಂಡಾ ಪಿಸ್ತೂಲು ತೆಗೆದನು ಮತ್ತು ಲೋಹಿಯಾ ಮೇಲೆ ಗರ್ಜಿಸಿ “ಭಾಷಣ ನಿಲ್ಲಿಸು. ಇಲ್ಲದಿದ್ದರೆ ಗುಂಡು ಹಾರಿಸುವೆ!" ಆದರೆ ದೇಶಭಕ್ತ, ರೋಮರೋಮದಲ್ಲಿ ದೇಶಪ್ರೇಮ ಸಂಚರಿಸುವ ಡಾ. ಲೋಹಿಯಾಗೆ ಕ್ಯಾಪ್ಟನ್ ಮಿರಾಂಡಾನ ಪಿಸ್ತೂಲಿನ ಭಯ ಏಕಿರಬೇಕು? ಅವರು ನಿರಾಯಾಸವಾಗಿ ನೊಣವನ್ನು ದೂರ ಮಾಡುವಂತೆ ಮಿರಾಂಡಾನ ಪಿಸ್ತೂಲು ಹಿಡಿದ ಕೈಯನ್ನು ತನ್ನ ಎಡಕೈಯಿಂದ ಬದಿಗೆ ಸರಿಸಿದರು! ಪುನಃ ಇಡೀ ಸಭೆಯು ‘ರಾಮಮನೋಹರ ಲೋಹಿಯಾ ಕೀ ಜೈ’ಎಂದು ಗರ್ಜಿಸಿತು. ಕೊನೆಗೆ ಮಿರಾಂಡಾ ಡಾ. ಲೋಹಿಯಾರನ್ನು ಬಂಧಿಸಿದನು; ಆದರೆ ಅವರು ಹೊತ್ತಿಸಿದ ಕ್ರಾಂತಿಯ ಕಿಡಿ ಮಾತ್ರ ನಂದಿಸಿಲು ಮಿರಾಂಡಾನ ಕ್ಷಮತೆಗೆ ಮೀರಿತ್ತು. ಕೊನೆಗೆ ಅದೇ ಕಿಡಿ ಹೊತ್ತಿ ಉರಿದು ಮಿರಾಂಡಾ ಮತ್ತು ಪೋರ್ತುಗೀಜರನ್ನು ಗೋಮಂತ ಭೂಮಿಯಿಂದ ಹೊರಗಟ್ಟಿಯೇ ಶಮನವಾಯಿತು.

ಡಾ. ಲೋಹಿಯಾ ಬಂಧನದ ನಂತರ ಉಪಸ್ಥಿತ ಜನಸಮುದಾಯದಲ್ಲಿ ಅವರ ಭಾಷಣದ ಪ್ರತಿಗಳನ್ನು ಹಂಚಲಾಯಿತು. ಇದರಿಂದ ಪ್ರೇರಿತರಾದ ಜನರು ತಮ್ಮತಮ್ಮ ಭಾಗಗಳಲ್ಲಿ ಇನ್ನಷ್ಟು ಜನರನ್ನು ಮುಕ್ತಿ ಚಳುವಳಿಯಲ್ಲಿ ಭಾಗವಹಿಸಲು ಪ್ರೆರೇಪಿಸಿ ಒಂದು ರೀತಿಯಲ್ಲಿ ಪೋರ್ತುಗೀಜ ಅಧಿಕಾರಕ್ಕೆ ಲಗ್ಗಮು ಹಾಕಿದರು. ಮುಂದೆ ಈ ಚಳುವಳಿಯು ಬೃಹತ್ ರೂಪ ಧರಿಸಿತು ಮತ್ತು ಗೋವಾ ಮುಕ್ತಿಗಾಗಿ ಎಲ್ಲ ಸ್ತರಗಳಲ್ಲಿ ಪ್ರಯತ್ನಗಳು ಆರಂಭವಾದವು. ಇದರಲ್ಲಿ ಗೋಮಂತಕೀಯರಂತೆ ಭಾರತದ ಇತರ ರಾಜ್ಯಗಳ ದೇಶಭಕ್ತರೂ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ೧೫.೮.೧೯೫೫ರಂದು ಪಾತ್ರಾದೇವಿ ಚೆಕ್ ನಾಕಾದಲ್ಲಿ ನಡೆದ ಸತ್ಯಾಗ್ರಹ ಅವೀಸ್ಮರಣೀಯವಾಯಿತು. ‘ಚಲೊ-ಚಲೊ ಗೋವಾ ಚಲೊ’, ‘ಲಾಠಿ-ಗೋಲಿ ಖಾಯೆಂಗೆ, ಫಿರ ಭಿ ಗೋವಾ ಜಾಯೆಂಗೆ’ ಎಂಬ ಜೈಕಾರ ಮಾಡುತ್ತಾ ಭಾರತದ ವಿವಿಧ ಭಾಗಗಳಿಂದ ಪ್ರಚಂಡ ಸಂಖ್ಯೆಯಲ್ಲಿ ಬಂದಿದ ನಿಶ್ಶಸ್ತ್ರ ಸತ್ಯಾಗ್ರಹಿಗಳ ಮೇಲೆ ಕ್ರೂರ ಪೋರ್ತುಗೀಜರು ಗುಂಡು ಹಾರಿಸಿದರು. ಅವರ ಈ ಅಮಾನುಷ ಕೃತ್ಯಕ್ಕೆ ಅನೇಕ ಸತ್ಯಾಗ್ರಹಿಗಳು ಬಲಿಯಾದರು, ಹುತಾತ್ಮಾರಾದರು; ಆದರೆ ಅ ಘಟನೆಯ ನಂತರ ಮಾತ್ರ ‘ಗೋವಾ ವಿಮೋಚನ ಸಮಿತಿ'ಯು ಸತ್ಯಾಗ್ರಹ ಪದ್ಧತಿಯನ್ನು ಹಿಂಪಡೆಯಿತು ಮತ್ತು ಅನೇಕ ತರುಣರು ‘ಮುಯ್ಯಿಗೆ ಮುಯ್ಯಿ’ ‘ಏಟಿಗೆ ಏಟು’ ಎಂದು ನಿರ್ಧರಿಸಿ ಕೈಯಲ್ಲಿ ರೈಫಲ್, ಕೈಬಾಂಬ್, ಮಶೀನ ಗನ್ ಹಿಡಿದುಕೊಂಡು ಪೋಲಿಸ ಠಾಣೆಗಳನ್ನು ದೋಚಿದರು. 

 File:Liberation cheer.jpg

ಕೊನೆಗೆ ಭಾರತ ಸರಕಾರವು ಸೈನ್ಯವನ್ನು ಕಳುಹಿಸಿ ಗೋವಾವನ್ನು ಮುಕ್ತಗೊಳಿಸಲು ನಿರ್ಧರಿಸಿತು. ಅದಕ್ಕನುಸಾರ ‘ಆಪರೇಶನ್ ವಿಜಯ’ ಅಂತರ್ಗತ ಭಾರತೀಯ ಸೈನ್ಯವು ಗೋವಾದ ಗಡಿಯ ಬೆಳಗಾವಿಗೆ ಬಂತು. ಅಲ್ಲಿರುವ ಸಾಂಬರಾ ವಿಮಾನ ನಿಲ್ದಾಣದಲ್ಲಿ ಯುದ್ಧ ವಿಮಾನಗಳು ಸಜ್ಜುಗೊಂಡಿದ್ದವು. ಮತ್ತೊಂದು ಬದಿಯಿಂದ ಕಾರವಾರದ ಮಾಜಾಳಿ ಭಾಗದಲ್ಲಿ ಸೈನ್ಯ ನಿಂತಿತು ಮತ್ತು ಪಶ್ಚಿಮ ಸಾಗರದಲ್ಲಿ ಭಾರತೀಯ ನೌಕಾಪಡೆಯು ನೆಲೆಯೂರಿತು. ೧೮.೧೨. ೧೯೬೧ರಂದು ಭಾರತೀಯ ಸೈನ್ಯವು ಗೋವಾ ಮೇಲೆ ಆಕ್ರಮಣ ಮಾಡಿತು ಮತ್ತು ಪೋರ್ತುಗೀಜರನ್ನು ಆವರಿಸಿ ಅವರಿಗೆ ಅಡುಗಿ ಕುಳಿತುಕೊಳ್ಳಲು ಕೂಡ ಜಾಗ ಇಡಲಿಲ್ಲ! ಗೋವಾದ ವಿಮಾನ ನಿಲ್ದಾಣವನ್ನು ಸ್ಫೋಟದಿಂದ ನಾಶಗೊಳಿಸಲಾಯಿತು. ಪೋರ್ತುಗಾಲದಿಂದ ಬಂದಿದ್ದ ಅಲ್ಬುಕರ್ಕ ಎಂಬ ಯುದ್ಧ ನೌಕೆಯನ್ನು ಮುಳುಗಿಸಿಲಾಯಿತು. ಸೈನ್ಯವು ಬಿರುಗಾಳಿಯಂತೆ ಬಂದು ಮರುದಿನವೇ ಗೋವಾವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಪೋರ್ತುಗಾಲನ ಗೋವಾದ ಸೈನ್ಯಾಧಿಕಾರಿ ಜನರಲ್ ಮಾನ್ಯುಅಲ್ ಆಂತಾನಿಯೂ ಸಿಲ್ವ್ ಭಾರತೀಯ ಸೈನ್ಯದ ಬ್ರಿಗೆಡಿಯರ್ ಕೆ. ಎಸ್. ಧಿಲ್ಲನ್ ಇವರ ಮುಂದೆ ಶರಣಾಗತಿ ಪತ್ರ ಬರೆದು ಅರ್ಪಿಸಿದನು ಮತ್ತು ಅದೇ ಕ್ಷಣದಲ್ಲಿ ನಾಲ್ಕುನೂರುವರೆ ವರ್ಷಗಳ ದೀರ್ಘಕಾಲದ ಪೋರ್ತುಗೀಜ ದಾಸ್ಯವು ಮುಗಿದು ಗೋವಾ ಮುಕ್ತವಾಯಿತು. ಈ ರೀತಿಯಲ್ಲಿ ಡಾ. ಲೋಹಿಯಾರವರ ಕ್ರಾಂತಿಯು ಫಲ ನೀಡಿತು. 

ಆಧಾರ : ದೈನಿಕ ‘ಪುಢಾರಿ’ 18.6.1999
ಮಾಹಿತಿ- ಅಂತರ್ಜಾಲದಿಂದ ಸಂಗ್ರಹಿಸಿದ್ದು.


No comments:

Post a Comment