Monday 9 December 2013

ಕವಿತೆ: ಡಾ.ಜಿ. ಕೃಷ್ಣ

ಪ್ರತಿಮಾ ಪಲಾಯನ

 Krishna Giliyar



 

ಸೀದಾ ಸಾದಾ ಕವಿತೆ
ಸದಾ ಬೇಡವಯ್ಯ, ಇರಲಿ
ಪ್ರತಿಮೆಗಳು
ಎಂದಿದ್ದನ್ನು
ಒಪ್ಪಿ
ಹುಡುಕಾಡಿ
ಮಳೆ, ಹಕ್ಕಿ, ಮರ, ಗಿಡ
ನಕ್ಷತ್ರ, ಸೂರ್ಯ
ಹಗಲು, ರಾತ್ರಿ-
ಗಳನ್ನೆಲ್ಲ
ಎಳೆತಂದು ನಿಲ್ಲಿಸಿ 
ನೀವು ನೀವಲ್ಲವೇ ಅಲ್ಲ, ಮತ್ಯಾರೋ
ಎಂದು
ಅವಕ್ಕೆ ಪರಿಪರಿಯಿಂದ ತಿಳಿಹೇಳಿದೆ

ಮಳೆ ಜಪ್ಪಡಿಸಿ ಹೊಯ್ದೇ ಹೊಯ್ಯಿತು
ಹಕ್ಕಿ
ರೆಕ್ಕೆ ಬಿಚ್ಚಿ ಹಾರಿ
ಮರದ ಮೇಲೆ ಕೂತಿತು
ನಕ್ಷತ್ರಗಳು
ರಾತ್ರಿಯೆಲ್ಲ ಮಿನುಗಿ
ಹಗಲಿಗೆ ಹೆದರಿ ಫೇರಿ ಕಿತ್ತವು

ಪ್ರತಿಮೆಗಳನ್ನು
ಹಿಡಿದಿಡಲಾಗದ 
ನನ್ನ
ದುಗುಡವಷ್ಟೆ ಉಳಿಯಿತು.

No comments:

Post a Comment