Wednesday 25 December 2013




ಜಿ ಎಸ್ ಎಸ್ ಶ್ರದ್ಧಾಂಜಲಿ

ಚಂದ್ರಶೇಖರ ವಸ್ತ್ರದ್

ಎದೆತುಂಬಿ ಹಾಡುವ ಹಕ್ಕಿಹಾಡನು ಹಿಡಿದು
ರೆಕ್ಕೆಯಕ್ಕರ ಕಟ್ಟಿ ಹಾರಿಬಿಟ್ಟವರು
ಲೋಕದಕ್ಕರೆಯನ್ನು ಲೆಕ್ಕಣಿಕೆಯಲಿ ತುಂಬಿ
ಕವಿತೆಯಾಗಿಸಿ ಜಗದ ಕೈಗೆ ಕೊಟ್ಟವರು

ಮಲೆನಾಡಿನುತ್ತುಂಗ ಸಹ್ಯಾದ್ರಿ ಗಿರಿಶೃಂಗ
ಮೌನಚೆಲುವಿಗೂ ಸಲುವ ಮಾತು ಕೊಟ್ಟವರು
ಇಹದ ಧೂಳಿಯ ಕೊಳೆಯ ಕಾವ್ಯತೀರ್ಥದಿ ತೊಳೆದು
ನಂಜಿನೆದೆ ಹದ ಮಾಡಿ ನಲುಮೆ ಸಸಿ ನೆಟ್ಟವರು

 The ‘link poet’ is no more

ಗುರು ಹಾರಿದಗಲಕ್ಕೆ ಹಾರಿದವರು
ಗುರುವೇರಿದೆತ್ತರಕೆ ಏರಿದವರು
ಮಾತಿನ ಹಣತೆಯಲಿ ಪ್ರೀತಿ ತೈಲವನೆರೆದು
‘ದೀಪದ ಹೆಜ್ಜೆ’ಯನು ತೋರಿದವರು

ಏನು ಹೇಳಲಿ ಇವರ ಬರಹದರಿವಿನ ಪರಿಯ
ಸಹೃದಯ ಹೃದಯಕ್ಕೆ ಬೆಳಕಿನಭ್ಯಂಜನ
ಕರುನಾಡ ಸಿರಿದೇವಿ ವರ ಪಾದ ಪಂಕಜದಿ
ಗದ್ಯ ಪದ್ಯಗಳೆರಡು ನೀಲಾಂಜನ
 

 ***

No comments:

Post a Comment