Wednesday 28 August 2013


 

ಸಾಲುಗಳು

1. 

ನಾಲಿಗೆಗೆ
ನುಣ್ಣನೆಯ
ಅನ್ನ ದಕ್ಕಲು
ದೇಹವಿಡೀ
ಮುಳ್ಳಾಗಿ
ಕಾಯಬೇಕೇ...?


 



2. 

ಸೊಬಗ
ಸವಿಯುವಾಗ
ಏಕಾಂಗಿತನದ
ಅರಿವೂ
ಇರಲಿ.

 


3. 

ನೀ ಬಂದಾಗ ಬಾಗಿಲಿದ್ದರೆ
ತೆರೆಯುವವರೆಗೆ
ಕಾಯಬೇಡ
ಒಳಗೆ
ಬಂದುಬಿಡು.

 



4. 


ಕಂಬನಿಯೊ
ಆನಂದಬಾಷ್ಪವೊ
ನನದಲ್ಲ-
ನಾನು
ನಿರ್ಗುಣಿ.





5. 

ನಾವು
ತೇವ ಕಾದಿದ್ದು ಇಲ್ಲೆ
ನೆಲ, ಮಣ್ಣು
ಸಾರ
ವಿಸ್ತಾರಗಳನೆಲ್ಲ
ಸಾಪೇಕ್ಷದ
ಗೋಡೆಗೆ ಅಂಟಿಸಿ-
ಬಿಟ್ಟಿದ್ದೇವೆ.






6.
 
ನಿಂತ ಗಡಿಯಾರ ಕೂಡ
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!
 
 
 
 
 
 
7. 

ಹರಿಯುವಾಗ
ಎದುರುಗಟ್ಟಿದರೆ
ಬಳಸಿ ತಬ್ಬದೆ
ಗತಿಯಿಲ್ಲ.
 
 
 
 
 ***
 
 
 
 

1 comment: