ಸಾಲುಗಳು
1.
ನಾಲಿಗೆಗೆ
ನುಣ್ಣನೆಯ
ಅನ್ನ ದಕ್ಕಲು
ದೇಹವಿಡೀ
ಮುಳ್ಳಾಗಿ
ಕಾಯಬೇಕೇ...?

2.
ಸೊಬಗ
ಸವಿಯುವಾಗ
ಏಕಾಂಗಿತನದ
ಅರಿವೂ
ಇರಲಿ.

3.
ನೀ ಬಂದಾಗ ಬಾಗಿಲಿದ್ದರೆ
ತೆರೆಯುವವರೆಗೆ
ಕಾಯಬೇಡ
ಒಳಗೆ
ಬಂದುಬಿಡು.

4.
ಈ
ಕಂಬನಿಯೊ
ಆನಂದಬಾಷ್ಪವೊ
ನನದಲ್ಲ-
ನಾನು
ನಿರ್ಗುಣಿ.

5.
ನಾವು
ತೇವ ಕಾದಿದ್ದು ಇಲ್ಲೆ
ನೆಲ, ಮಣ್ಣು
ಸಾರ
ವಿಸ್ತಾರಗಳನೆಲ್ಲ
ಸಾಪೇಕ್ಷದ
ಗೋಡೆಗೆ ಅಂಟಿಸಿ-
ಬಿಟ್ಟಿದ್ದೇವೆ.

6.
ನಿಂತ ಗಡಿಯಾರ ಕೂಡ
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!
ದಿನದಲ್ಲಿ
ಎರಡು ಬಾರಿ
ಸರಿಯಾದ ಸಮಯ
ತೋರಿಸುತ್ತೆ-
ಹಾಗಾಗಿ
ಇದು
ಕವಿತೆಯಲ್ಲ!

7.
ಹರಿಯುವಾಗ
ಎದುರುಗಟ್ಟಿದರೆ
ಬಳಸಿ ತಬ್ಬದೆ
ಗತಿಯಿಲ್ಲ.
ಎದುರುಗಟ್ಟಿದರೆ
ಬಳಸಿ ತಬ್ಬದೆ
ಗತಿಯಿಲ್ಲ.

***
awesome it is ... kudhos.. to both ...
ReplyDelete