Tuesday 27 August 2013

ಸಿದ್ಧರಾಮ ವಚನ



ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ

ಕೇಳಿರಯ್ಯಾ

ಕೈಲಾಸವೆಂಬುದು ಭೂಮಿಯೊಳಿರುವ ಹಾಳುಬೆಟ್ಟ

ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು

ಅಲ್ಲಿರ್ದ ಚಂದ್ರಶೇಖರನು ಬಹು ಎಡ್ಡ

ಇದರಾಡಂಬರವೇಕಯ್ಯಾ

ನಮ್ಮ ಪುರಾತನರಿಗೆ ಸದಾಚಾರದಿಂದ ವರ್ತಿಸಿ

ಲಿಂಗಾಂಗ ಸಾಮರಸ್ಯವ ತಿಳಿದು

ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ

ಕಪಿಲಸಿದ್ಧಮಲ್ಲಿಕಾರ್ಜುನ.


***

No comments:

Post a Comment