Wednesday 17 July 2013




ನಡಿಗೆ                                                    ಡಾ.ಜಿ ಕೃಷ್ಣ






ನಿನ್ನೆ

ಬೆಳಗಿನ ನಡಿಗೆಯ ನಡುವೆ

ನೋಡಿದೆ,

ಬಸವನಹುಳು

ರಸ್ತೆಯಲ್ಲಿ

ಆ ಬದಿಯಿಂದ

ಈ ಬದಿಗೆ

ತೆವಳುತ್ತಿತ್ತು.

ಅತಂಕದ ನಡುವೆ

ದಾಟಿಬಿಟ್ಟಿತು.



ಇಂದು

ಅದರದೇ ಗುಂಗು,

ನಾಯಿಗಳಿಗೆ

ಹೆದರಿ

ಒಯ್ಯುತ್ತಿದ್ದ ಬೆತ್ತ

ನನ್ನ ಹಿಡಿತದಲ್ಲಿ

ಕರುಣೆಯ ನಗು

ನಕ್ಕಿತು.

ನಾನೂ ನಕ್ಕೆ.

***

No comments:

Post a Comment