Monday 15 July 2013

ಹಸಿದ ಹೊಟ್ಟೆಯ ಶಾಪ...!!!              

                                                                                          Rajendra Prasad    


















                                                                     ರಾಜೇಂದ್ರ ಪ್ರಸಾದ್



ಹರಿದ ಅಂಡರುವೇರಿಗೂ ತ್ಯಾಪೆ
ಇದೆ ಸಾಹೇಬರೇ
ಬಟ್ಟೆ ನಮಗೆಂದೂ ಮಾನ ಮುಚ್ಚಿ
ಕೊಳ್ಳಲೂ ಸಿಗಲಿಲ್ಲ, ಶೋಕಿಗೆ
ಸಿಕ್ಕಿತೇ ?!

ನಿಮ್ಮ ವಾದ, ತರ್ಕಗಳ
ಹರಟೆಗಿಂತ ನಮ್ಮ ಬದುಕು
ದೊಡ್ಡದು ಅಲ್ವರಾ ?

ದುಡಿದ ಕೂಲಿ ದಿನಕ್ಕೆ
ರೂಪಾಯಿಯಲ್ಲೇ ಸಿಗೋದು
ಹ್ಹ ಹ್ಹ ಅದೂ ಅಪಮೌಲ್ಯ
ದುಡಿಸಿಕೊಂಡ ನಿಮಗೆ
ಸಾವಿರ ಸೇರಿದ ಡಾಲರು
ಮತ್ತು ಅದರ ದವಲತ್ತು

ಬಡವನ ತುತ್ತು ಅನ್ನದ ಮೇಲೆ
ರಾಜಕಾರಣ ಮಾಡುವ
ನಿಮ್ಮ ಬಾಯಿಗಳಿಗೆ
ನಿಮ್ಮ ದೇವರುಗಳಿಗೆ
ನಿಮ್ಮ ಧರ್ಮಗಳಿಗೆ
ನಿಮ್ಮ ಜಾತಿಗಳಿಗೆ
ಗೆದ್ದಲು ಹತ್ತಲಿ..

ನೀವು ನಡೆವ ಚಪ್ಪಲಿ
ನೀವು ಉಣ್ಣುವ ಅನ್ನ
ನೀವು ಹೊದೆವ ಬಟ್ಟೆ
ಎಲ್ಲಾ ಬಡವನ ಬೆವರು

ಬೆವರ ಬದಲು ರಕ್ತ
ಕೇಳುತ್ತೀರಿ… ನಿಮ್ಮ ಒಡಲು ಬರಿದಾದರೆ
ಬದುಕು ಬರವಾದೀತು ಸಾಹೇಬರೇ..
ಮುಂದೊಮ್ಮೆ ನಿಮ್ಮ ಬೆವರ ನೀವೇ
ಕುಡಿಯಬೇಕು.. ಕಾಲ ದೂರವಿಲ್ಲ




***

No comments:

Post a Comment